'ದಂಧೆ ಬಾಯ್ಸ್' ಚಾಲನೆ
Posted date: 01 Mon, Sep 2014 – 09:21:49 AM

ಎಲ್ ಪಿ ಪ್ರೊಡಕ್ಷನ್ ಲಾಂಛನದಲ್ಲಿ ಲಕ್ಷ್ಮಿನಾರಾಯಣ ಸೋನಿ ಅರ್ಪಿಸುವ ಎ ಪ್ರಭಾಕರ ರೆಡ್ಡಿ ಅವರ ನಿರ್ಮಾಣದ, ಶ್ವೇತ ವಿ ಅವರ ಸಹ ನಿರ್ಮಾಣದ ಚಿತ್ರ 'ದಂಧೆ ಬಾಯ್ಸ್'...ಇವ್ರಿಗೆ ಹಿಂದಿಲ್ಲ... ಮುಂದಿಲ್ಲ... ಅಡಿ ಬರಹದೊಂದಿಗೆ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ಆರಂಭಗೊಂಡಿದೆ.

ಮೊದಲ ದೃಷ್ಯಕ್ಕೆ 'ಧುನಿಯ' ವಿಜಯ್ ಅವರು ಕ್ಲಾಪ್ ಮಾಡಿದರೆ, ನವರಸನಾಯಕ ಜಗ್ಗೇಶ್ ಅವರು ಪುತ್ರನ ಸಿನೆಮಕ್ಕೆ ಕ್ಯಾಮರಾ ಚಾಲನೆ ಮಾಡಿದರು. ನಾಲ್ಕು ನಿಮಿಷಗಳ ಟ್ರೈಲರ್ ಸಹ ಅಂದು ಅನಾವರಣ ನಟ ಕೋಮಲ್ ಕುಮಾರ್ ಹಾಗೂ ಎಚ್ ಡಿ ಗಂಗರಾಜು ಅವರು ಮಾಡಿದರು. ಬಿ ಕೆ ಶ್ರೀ ನಿವಾಸ್ ಅವರು ಈ ಸಮಯದಲ್ಲಿ ಉಪಸ್ತಿತರಿದ್ದರು.

ಈ ಹಿಂದೆ 'ಕುಂಭ ರಾಶಿ' ಸಿನಮ ನಿರ್ದೇಶನ ಮಾಡಿದ್ದ ಚಂದ್ರಹಾಸ್ ಅವರು ಈ ಚಿತ್ರವನ್ನೂ 35 ದಿವಸಗಳಲ್ಲಿ ಮಾತಿನ ಭಾಗವನ್ನು ಚಿತ್ರೀಕರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಮೊದಲನೇ ಹಂತದಲ್ಲಿ ಬೆಂಗಳೂರು, ಮೈಸೂರು ಹಾಗೂ ಮಾಲೆ ಮಾದೇಶ್ವರ ಬೆಟ್ಟ ಚಿತ್ರೀಕರಣವಾಗುವ ಸ್ಥಳಗಳು. ಎರಡನೇ ಹಂತದಲ್ಲಿ ಸಾಹಸ ಹಾಗೂ ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣ ಎಂಬುದು ಅವರ ಯೋಜನೆ.

ಪ್ರಮುಖ ನಾಯಕ ಈ 'ದಂಧೆ ಬಾಯ್ಸ್' ಅಲ್ಲಿ ಗುರುರಾಜ್ ಜಗ್ಗೇಶ್. ಇವರ ಜೊತೆ ಹೇಮಂತ್ ಹಾಗೂ ಮಾದೇಶ್ ಇನ್ನಿಬ್ಬರು ನಾಯಕರು. ಮಾಲೆ ಮಾದೇಶ್ವರ ಬೆಟ್ಟದಲ್ಲಿ ಹುಟ್ಟಿದ ಮೂರು ಯುವಕರುಗಳಿಗೆ ಗುರಿ ಇದೆ ಆದರೆ ಸಾಧನೆಗೆ ಅವರು ಹಿಡಿಯುವ ಮಾರ್ಗ ಬೇರೆ. ಜೀವನದಲ್ಲಿ ಸಾಧನೆ ಮಾಡಲು ಅವರು ಡಾನ್ ಒಬ್ಬನನ್ನು ಮುಗಿಸಿ ಅವನ ಪಟ್ಟ ಏರಲು ಲೆಕ್ಕ ಹಾಕುತ್ತಾರೆ. ಅದು ಸಾಧ್ಯವಾ? ಚಿತ್ರದಲ್ಲಿ ನಾಯಕಿ ಸೌಜನ್ಯ ಅವರ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾನ್ ಆಗಿ ಶರತ್ ಲೋಹಿತಾಶ್ವ ಇದ್ದಾರೆ.

ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ, ಶ್ರೀವತ್ಸ ಅವರ ಸಂಗೀತ, ಪಿ ಎಲ್ ರವಿ ಅವರ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಅವರ ಸಂಕಲನ, ಉಮೇಶ್, ಚಾಮರಾಜ್ ಹಾಗೂ ರಾಮು ಅವರ ನೃತ್ಯ ನಿರ್ದೇಶನ ಒದಗಿಸಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed